
2 ವರ್ಷ , 11 ತಿಂಗಳು ,18 ದಿನಗಳಲ್ಲಿ ,,,,,,,,,,,,,,,,,,,,,,,,,,,,,
22 ಭಾಗಗಳು ,, (ಪ್ರಸ್ತುತ 24 )
8 ಅನುಸ್ಹುಚಿಗಳು. (ಪ್ರಸ್ತುತ 12 )
395 ಕಲಂಗಳು, (ಪ್ರಸ್ತುತ 448 )
ಒಳಗೊಂಡ
ಭಾರತದ ಸಂವಿಧಾನ ಜನವರಿ 26 , 1950 ರಂದು ಜಾರಿಗೆ ಬಂದಿತು,,ಜವಾಹರ್ ಲಾಲ್ ನೆಹೆರು ಹಾಗು ಸರ್ದಾರ್ ಪಟೇಲರು ಹೆಸರಾಂತ ಸಂವಿಧಾನ ತಜ್ಞ "ಐವರ್ ಜೆನ್ನಿಂಗ್ "ರನ್ನು ಸಂವಿಧಾನ ರಚನೆ ಬಗ್ಗೆ ಸಲಹೆ ಕೇಳಲು ಆಮಂತ್ರಿಸ ಬೇಕೆಂದರು . ಆದರೆ ನಮಗೆ ಸ್ವಾತ್ಯಂತ್ರ ಸುಮ್ಮನೆ ಸಿಕ್ಕಿಲ್ಲ ,,ಹಲವು ನಾಯಕರ ಬಲಿದಾನ , ಕಷ್ಟ ,, ಸೆರೆಮನೆ ಸಹವಾಸ,,ನೋವುಗಳನ್ನು ಪಡೆದು ಈ ನಮ್ಮ ದೇಶಕ್ಕೆ ಸ್ವಾತ್ಯಂತ್ರ ದೊರಕಿಸಿ ಕೊಟ್ಟಿದ್ದಾರೆ,, ಹೀಗಿದ್ದಲ್ಲಿ ಮಹಾತ್ಮ ಗಾಂಧಿಜಿಯವರು ವಿದೇಶಿ ತಜ್ಞರನ್ನು ಕರೆಯುವುದಕ್ಕಿಂತ ಸ್ವದೇಶಿ ತಜ್ಞರನ್ನು ಹುಡುಕಿ ಆಯ್ಕೆ ಮಾಡಲು ಸೂಚಿಸಿದರು .ಹಾಗೆಯೇ ಕಷ್ಟದಿಂದ ಬಂದಂಥಹ ಸ್ವಾತ್ಯಂತ್ರವನ್ನು ಅದರ ಸಂವಿಧಾನವನ್ನು ರೂಪಿಸಲು ಅವರಿಗೆ ಕಣ್ಣಿಗೆ ಬಿದ್ದವರು ಮಹಾನ್ ಅಧುನಿಕ ಮನು ಡಾ II ಬಿ,ಅರ್, ಅಂಬೇಡ್ಕರ್ . ಇವರನ್ನು ಸಂವಿಧಾನದ ಕರಡು ತಿದ್ದಲು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಯಿತು...ಹಾಗೆಯೇ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಕೊಡುತಿದ್ದ ಸೃಷ್ಟಿಕರಣ ಹಾಗು ವಿವರಗಳು ಎಲ್ಲರ ಗಮನ ಸೆಳೆದವು ,, ಹೀಗಾಗಿ ಇವರನ್ನು "ಎಂ ,ವಿ ,ಪೈಲಿ" ರವರು "ಭಾರತದ ಸಂವಿಧಾನದ ಶಿಲ್ಪಿ " ಎಂದು ಕರೆದರು....
ಇಂಥಹ ಮಾಹಾನ್ ದಲಿತರ ಸೂರ್ಯ ಭಾರತ ರತ್ನ ಡಾ II ಬಿ,ಅರ್, ಅಂಬೇಡ್ಕರ್ ರವರು ತಮ್ಮ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂಲ ಮಂತ್ರ ದೊಂದಿಗೆ ದಲಿತರಿಗೆ ಹಿಂದುಳಿದ ಜನರಿಗೆ ತಮ್ಮ ಕೊನೆಯ ಉಸಿರು ಇರುವ ವರೆಗೂ ಹೋರಾಡಿದ ಧೀಮಂತ ನಾಯಕನಿಗೆ 121 ನೇ ಜನ್ಮ ದಿನವನ್ನು ನೆನೆದು ಅವರಿಗೆ ನಮ್ಮ ನಮನಗಳನ್ನು ಹೇಳೋಣ,,